ಆತ್ಮೀಯ "ಬಳೆಗಾರ"ನಿಗೊಂದು ಅಕ್ಷರ ಶ್ರದ್ಧಾಂಜಲಿ....
ಶಿವಮೊಗ್ಗ ವೆಂಕಟೇಶ್ ಇನ್ನಿಲ್ಲ.. ಮೈಸೂರು ಮಲ್ಲಿಗೆಯ "ಭಾಗ್ಯದ ಬಳೆಗಾರ" ನಿರ್ಗಮಿಸಿದ್ದಾರೆ.
ರಂಗಭೂಮಿಯೊಡನೆ ನಿಕಟ ನಂಟು ಹೊಂದಿದ್ದ ವೆಂಕಟೇಶ್, ತಮಗೆ ಸಿಕ್ಕಿದ್ದ ಕೆಲವೇ ಅವಕಾಶಗಳನ್ನೂ ಸಮರ್ಥವಾಗಿ ನಿಭಾಯಿಸಿದವರು.
ಸುಮಾರು 15-16 ವರ್ಷಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ "ದಾಳ" ಫೋಟೋಕಾಮಿಕ್ ನಲ್ಲಿ ಮೊದಲು ಅವರ ಪರಿಚಯ. ನಂತರ ಕೆಲವು ಧಾರವಾಹಿಗಳಲ್ಲಿ....ಮೈಸೂರು ಮಲ್ಲಿಗೆ ಚಿತ್ರದ ಬಳೆಗಾರನಾಗಿ ತಮ್ಮ ಪ್ರತಿಭೆಯ ಅನಾವರಣ.
ಆದರೆ ವಿಧಿಯ ವಿಪರ್ಯಾಸ, ಅವರ ಪ್ರತಿಭೆಗೆ ಮನ್ನಣೆ ಸಿಗಲೇ ಇಲ್ಲ. ಇದಕ್ಕಾಗಿ ಅವರು ಬಹಳ ನೊಂದುಕೊಂಡಿದ್ದೂ ಹೌದು. ಮೊನ್ನೆಯೀಚೆಗೆ ಇಹಲೋಕದಿಂದ ದೂರ ಪಯಣ. ಕೊನೆಯ ಗಳಿಗೆಯಲ್ಲು ಆ ನೋವು ಅವರನ್ನು ಕಾಡುತ್ತಿತ್ತು ಎಂದು ಅವರ ಆಪ್ತರ, ಅಭಿಮಾನಿಗಳ ಅಭಿಪ್ರಾಯ.
Deepu, i'm sorry that i could not contact you....
1 Comments:
oh nang e tilideralila. bahala prauda kalvidaragidru avru
Post a Comment
<< Home